ಜೀವಿಯೊಂದರ ಜೊತೆ ಸಂಭಾಷಣೆ ನಡೆಸಿದಂತೆ ಕಲ್ಪಿಸಿ ಆ ಜೀವಿಯ ಬಗ್ಗೆಹೆಚ್ಚಿನ ವಿಷಯವನ್ನುತಿಳಿದುಕೊಳ್ಳುವಂತಹ ಶೈಲಿಯನ್ನು ಅನೇಕರು ಮೆಚ್ಚಿಕೊಂಡಿದ್ದರು. ಅದೇ ರೀತಿಯಲ್ಲಿ ಈ ವಾರದ ಜನ-ವಿಜ್ಞಾನದಲ್ಲಿ ಜೇಡವೊಂದರ ಜೊತೆ ಮಾತುಕತೆ ನಡೆಸಲಾಗಿದೆ. ಕಲ್ಪಿತ ಸಂದರ್ಶನದ ಭಾಗವನ್ನುಇಲ್ಲಿ ಪ್ರಕಟಿಸಲಾಗಿದೆ. ( ಸಂಪಾದಕರು,ಜನಪ್ರತಿನಿಧಿ ಪತ್ರಿಕೆ)
* ನಮಸ್ಕಾರ
ಜೇಡ : ನಮಸ್ಕಾರ, ನಿಮ್ಮೆಲ್ಲ ಓದುಗರಿಗೂ ಸಂಕ್ರಮಣದ ಶುಭಾಶಯಗಳು
* ಹಬ್ಬದಶುಭಾಶಯವೇ? ನಾವು, ಮಾನವರು ಹಬ್ಬಬಂತೆಂದರೆ ಮನೆಯನ್ನು ಚೊಕ್ಕಟಗೊಳಿಸುತ್ತೇವೆ. ಆ ಕೆಲಸದಲ್ಲಿ ಜೇಡರ ಬಲೆಗಳನ್ನುತೆಗೆದುಹಾಕುವುದೂ ಬರುತ್ತದೆ.
ಜೇಡ : ಬಲೆ ನೇಯುವುದುನಮ್ಮಕೆಲಸ. ಅದನ್ನು ನಾವು ಬದುಕಿರುವವರೆ ಗೂಮಾಡುತ್ತಲೇ ಇರುತ್ತೇವೆ. ಬಲೆ ನೇಯುವಾಗ ಅನೇಕ ವಿಘ್ನಗಳು ಉಂಟಾಗುತ್ತವೆ. ಬಲೆ ಹರಿದುಹೋಗುತ್ತಲೇ ಇರುತ್ತದೆ. ಆದರೆ ನಾವು ಪ್ರಯತ್ನ
ಮುಂದುವರಿಸುತ್ತಲೇ ಇರುತ್ತೇವೆ. ಈ ಭೂಮಿಯ ಮೇಲೆ ಕಳೆದ ನಾಲ್ಕು ನೂರು ಮಿಲಿಯ ವರ್ಷಗಳಿಂದಲೂ
ನಮ್ಮ ಸಂತತಿ ಜೀವಿಸುತ್ತಿದೆ. ನಾವಿದೇ ಕೆಲಸದಲ್ಲಿ ಆಗಿಂದಲೂ ನಿರತರಾಗಿದ್ದೇವೆ.
* ನೀವು ಬಲೆ ನೇಯುವುದು ಯಾವ ಉದ್ದೇಶಕ್ಕಾಗಿ?
ಜೇಡ : ಬಲೆನಮ್ಮ ಆಹಾರ ಬೇಟೆಯ ಹೊಂಚು. ಈ ಬಲೆಯಲ್ಲಿ ಕೀಟಗಳು ಸಿಕ್ಕಿಕೊಳ್ಳುವಂತೆ ಮಾಡಿ ಅವುಗಳನ್ನು ಬೇಟೆಯಾಡುವುದು ನಮ್ಮ
ಉದ್ದೇಶ. ಇದಲ್ಲದೇ ಮೊಟ್ಟೆ ಇಡುವ ಸ್ಥಳವಾಗಿ, ಜಂಪಿಂಗ್ ಬೋರ್ಡ್ ಆಗಿ ಇಲ್ಲವೆ ಮನೆಯಾಗಿಯೂ ಬಲೆಯ ಉಪಯೋಗವಿದೆ.
* ಕೀಟಗಳು ಹೇಗೆ ಸಿಕ್ಕಿಕೊಳ್ಳುತ್ತವೆ?
ಜೇಡ : ಕೀಟಗಳು ಬಲೆಯನ್ನು ದಾಟುವ ಅಥವಾ
ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಲೆಗೆ ಅಂಟಿಕೊಳ್ಳುತ್ತವೆ. ಬಲೆಯ ದಾರಗಳಲ್ಲಿ ಅಂಟು ಪದಾರ್ಥವಿರುತ್ತದೆ.
* ನಿಮ್ಮ ಬಲೆಯಲ್ಲಿ ನೀವೇ ಏಕೆ ಸಿಕ್ಕಿಕೊಳ್ಳುವುದಿಲ್ಲ?
ಜೇಡ : ಇದು ಬಹಳ ಜನ ಕೇಳುವ ಪ್ರಶ್ನೆ. ಏಕೆಂದರೆ ಮಾನವರು ಸಾಮಾನ್ಯವಾಗಿ ಅವರೇ ಹೆಣೆದ ಬಲೆಯಲ್ಲಿ ಸಿಕ್ಕಿಕೊಂಡುಬಿಡುತ್ತಾರೆ. ಹ್ಹ...ಹ್ಹ...ಹ್ಹ (ಬಾಯ್ತುಂಬಾನಗುವುದು).
* ನೀವು ನನ್ನಪ್ರಶ್ನೆಗೆ ಉತ್ತರಿಸಲೇ ಇಲ್ಲ?
ಜೇಡ : ಓ... ಹೌದಲ್ಲ... ನಾವು ಬಲೆ ಕಟ್ಟುವಾಗ ಎರಡು ಬೇರೆ ಬೇರೆ ಲಕ್ಷಣಗಳ ಎಳೆಗಳನ್ನು
ತಯಾರಿಸುತ್ತೇವೆ. ಅವುಗಳಲ್ಲಿ ಒಂದು ಅಂಟಾಗಿರುತ್ತದೆ ಆದರೆ, ಇನ್ನೊಂದಕ್ಕೆ ಅಂಟುವ ಗುಣ ಇರುವುದಿಲ್ಲ. ಈರಹಸ್ಯ ನಮಗೆ ಗೊತ್ತಿರುತ್ತದೆ. ನಾವು ಅಂಟದ ಎಳೆಗಳನ್ನು ಬಳಸಿ ಬಲೆಯ ಮೇಲೆ ಚಲಿಸುತ್ತೇವೆ. ಅಲ್ಲದೇ, ನಮ್ಮಕಾಲಿಗೆ ಅಂಟು ತಾಗದ ಹಾಗೆ ಜಿಡ್ಡಿನ ಪದರವೊಂದಿರುತ್ತದೆ.
* ಎಲ್ಲ ಜೇಡಗಳೂ ಒಂದೇವಿನ್ಯಾಸದ ಬಲೆ ಕಟ್ಟುತ್ತವೆಯೇ?
ಜೇಡ : ಇಲ್ಲ. ಸಸ್ತನಿಗಳಲ್ಲಿ ಕೇವಲ 4,000 ಪ್ರಬೇಧಗಳಿದ್ದರೆ ನಮ್ಮಲ್ಲಿ 40,000 ಪ್ರಬೇಧಗಳಿವೆ. ಪ್ರತಿ ಪ್ರಬೇಧವೂ ಒಂದೊಂದು ವಿನ್ಯಾಸದಲ್ಲಿ ಬಲೆ ನೇಯುತ್ತದೆ.
* ಎಲ್ಲಜೇಡಗಳು ಬಲೆ ನೇಯುತ್ತವೆಯೇ?
ಜೇಡ : ಇಲ್ಲ, ಕೆಲವು ಪ್ರಬೇಧದ ಜೇಡಗಳು ಬಲೆ ಹೆಣೆಯುವುದಿಲ್ಲ. ಬಲೆ ಹೆಣೆಯದ ಜೇಡಗಳು ತಮ್ಮ ಬೇಟೆಯನ್ನು ಮುನ್ನುಗ್ಗಿಹಿಡಿಯುತ್ತವೆ. ಇಂತಹುಗಳಲ್ಲಿ ಪಕ್ಷಿಗಳನ್ನು ಬೇಟೆಯಾಡುವ ಪ್ರಬೇಧದ ಜೇಡಗಳೂಸೇರುತ್ತವೆ.
* ಜೇಡಗಳುವಿಷಕಾರಿಯೇ?
ಜೇಡ : ಹೌದು, ಜೇಡಗಳು ವಿಷಪದಾರ್ಥವನ್ನುಹೊಂದಿವೆ. ಅದರ ಪ್ರಮಾಣ ಬೇರೆಬೇರೆ ಆಗಿರುತ್ತದೆ. ಈ ವಿಷವಸ್ತುಗಳನ್ನು ಬಳಸಿ ಅವು ಬೇಟೆಯನ್ನು ಸಾಯಿಸಬಲ್ಲವು ಇಲ್ಲವೇ ನಿಷ್ಕ್ರೀಯಗೊಳಿಸಬಲ್ಲವು. ಕಪ್ಪುವಿಧವೆಎಂಬಜೇಡವಿದೆ, ಇದುತುಂಬಾವಿಷಕಾರಿ, ಕಪ್ಪುವಿಧವೆ ಜೇಡಮನುಷ್ಯನನ್ನೂ
ಸಾಯಿಸಬಲ್ಲದು.
* ಆ ಜೇಡಕ್ಕೆ ಕಪ್ಪುವಿಧವೆ ಎಂದು ಏಕೆ ಕರೆಯುತ್ತಾರೆ?
ಜೇಡ : ಲೈಂಗಿಕ ಸಂಪರ್ಕದ ನಂತರ ಆಜೇಡ
ಗಂಡನನ್ನು ಸಾಯಿಸುತ್ತದೆ.
* ನೀವು ಕೀಟಗಳಲ್ಲವೇ?
ಜೇಡ : ಅಲ್ಲ, ಬಹಳಮಟ್ಟಿಗೆ ಕೀಟಗಳನ್ನು ಹೋಲುತ್ತೇವಾದರೂ ನಾವು ಅರಾಕ್ನಿಡಾ ಎಂಬವರ್ಗಕ್ಕೆ ಸೇರುತ್ತೇವೆ. ಕೀಟಗಳಿಗೆ ಮೂರುಜೊತೆ ಕಾಲುಗಳಿದ್ದರೆ ನಮಗೆ ಎಂಟುಕಾಲುಗಳಿರುತ್ತದೆ.
* ಎಂತಹ ವಸ್ತುವಿನಿಂದ ನೀವು ಎಳೆ ತಯಾರಿಸುತ್ತೀರಿ?
ಜೇಡ : ಅಮಿನೋಆಮ್ಲಗಳಉದ್ದಸರಪಳಿಯನ್ನು
ನೀವುಪ್ರೋಟೀನ್ ಎಂದುಕರೆಯುತ್ತೀರಿ. ಅದನ್ನೇ ನಾವು ದ್ರಾವಣವಾಗಿಸಿ ಎಳೆತಯಾರಿಸುತ್ತೇವೆ. ತೀರಾ ಸೂಕ್ಷ್ಮವಾದ ಎಳೆಗಳಿವು. ಆದರೆಬಹಳಬಲಿಷ್ಟ. ಈಎಳೆಗಳು ಅದೇ ದ್ರವ್ಯರಾಶಿಯ ಕಬ್ಬಿಣಕ್ಕಿಂತ ಐದು ಪಟ್ಟುಬಲಿಷ್ಟ.
* ನೀವು ಬಲೆಯ ಇನ್ನೊಂದು ಮೂಲೆಯಲ್ಲಿರುವಾಗ ಮತ್ತೊಂದುಮೂಲೆಯಲ್ಲಿ
ಸಿಕ್ಕಿಬಿದ್ದ ಅತಿಚಿಕ್ಕಕೀಟದ ಸುಳಿವು ದೊರೆಯುವುದುಹೇಗೆ?
ಜೇಡ : ನಮ್ಮಕಾಲಿಗೆ ಟ್ರೈಕೋಬೊಥ್ರಿಯಾ
ಎಂಬ ಹೆಚ್ಚುವರಿ ಕೂದಲುಗಳಿರುತ್ತವೆ. ಇವು ಬಲೆಯಲ್ಲುಂಟಾಗುವ ಅತಿಸೂಕ್ಷ್ಮಕಂಪನಗಳನ್ನು ಗ್ರಹಿಸಬಲ್ಲವು. ಬಲೆಅಲ್ಲಾಡಿದಂತೆ ನಮಗೆ ಬೇಟೆಯ ವಾಸನೆ ಬಡಿದಹಾಗೆ; ಬಲೆಯ ಕಂಪನದ ಪ್ರಮಾಣದ ಮೇಲೆ ನಾವು ನಮ್ಮ ಬೇಟೆಯ ಗಾತ್ರದ ಬಗ್ಗೆ ಊಹಿಸಬಲ್ಲೆವು.
* ಇದುವರೆಗೆ ನಮ್ಮೊಡನೆ ಕೆಲವು ಉಪಯುಕ್ತಮಾಹಿತಿಗಳನ್ನು ಹಂಚಿಕೊಂಡಿರುವುದಕ್ಕೆ
ಧನ್ಯವಾದಗಳು. ನಮ್ಮಓದುಗರಿಗೆ ನಿಮ್ಮಸಂದೇಶವೇನು?
ಜೇಡ : “ಮರಳಿಯತ್ನವಮಾಡು”
ಇದೇನನ್ನಸಂದೇಶ. ಧನ್ಯವಾದಗಳು.